ಬಣ್ಣದ ಲೋಕದಲ್ಲಿ ಹೆಸರು ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇನ್ನು ಸಿನಿ ಪ್ರಪಂಚಕ್ಕೆ ಯಾವುದೇ ಸಂಭಂದವಿಲ್ಲದೆ ಕಷ್ಟ ಪಟ್ಟು ಮೇಲೆ ಬಂದಂತಹ ಅಧ್ಭುತ ನಟಿ ಹಾಗೂ ಅದ್ಭುತ ನಿರೂಪಕಿ ಅನುಶ್ರೀ. ಹೌದು ಕನ್ನಡ ಕಿರುತೆರೆಯ ಟಾಪ್ ನಿರೂಪಕಿಯರ ಪೈಕಿ ಅನುಶ್ರೀ ಮೊದಲ ಸ್ಥಾನದಲ್ಲಿದ್ದಾರೆ.
ತಮ್ಮ ಅದ್ಭುತ ನಿರೂಪಣೆಯ ಮೂಲಕವೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ ನಟಿ ಅನುಶ್ರೀ. ಯಾವುದೇ ಕಾರ್ಯಕ್ರಮ ಇರಲಿ, ಅಥವಾ ಯಾವುದೇ ಸಿನಿಮಾ ಪ್ರಚಾರ ಇರಲಿ ಅದಕ್ಕೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅನುಶ್ರೀ ನಿರೂಪಣೆ ಇಲ್ಲದೆ ಆ ಕಾರ್ಯಕ್ರಮಕ್ಕೆ ಆ ಚರ್ಮ ಬರುವುದಿಲ್ಲ.
ಇನ್ನು ಜೀ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸಿಂಗಿಂಗ್ ಕಾರ್ಯಕ್ರಮದ ಮೂಲಕ ಅನುಶ್ರೀ ಅವರು ಎಲ್ಲರ ಮನೆ ಮಾತಾಗಿದ್ದಾರೆ. ತಮ್ಮ ಅದ್ಭುತ ನಿರೂಪಣೆ ಹಾಗೂ ಕಾಮಿಡಿ ಟೈಮಿಂಗ್ ನ ಮೂಲಕ ನಟಿ ಅನುಶ್ರೀ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಜೀವ ತುಂಬುವ ಕೆಲಸ ಮಾಡಿದ್ದರು ಎಂದರೆ ತಪಪಾಗುವುದಿಲ್ಲ.
ಒಬ್ಬ ಅದ್ಬುತ ನಿರೂಪಕಿಯ ಜೊತೆಗೆ ಅನುಶ್ರೀ ಒಬ್ಬ ಅದ್ಭುತ ನಟಿ ಕೂಡ ಹೌದು. ಮುರಳಿ ಮೇಟ್ಸ್ ಮೀರಾ, ಬೆಂಕಿಪಟ್ನ, ಮಾಧ ಮತ್ತು ಮಾನಸಿ, ಟ್ಯೂಬ್ಲೈಟ್, ರಿಂಗ್ ಮಾಸ್ಟರ್, ಉಪ್ಪು ಹುಳಿ ಕಾರ ಇನ್ನು ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ನಟಿ ಅನುಶ್ರೀ.
ಇನ್ನು ಇದೀಗ ನಟಿ ಅನುಶ್ರೀ ಅವರನ್ನು ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೇಷನ್ ಆಗಿರುವ ಕಾಫಿ ನಾಡು ಚಂದು ಭೇಟಿ ಮಾಡಿದ್ದಾರೆ. ಇನ್ನು ಕಾಫಿ ನಾಡು ಚಂದು ಅನುಶ್ರೀ ಅವರ ಮೇಲೆ ಕೂಡ ಹಾಡು ಬರೆದಿದ್ದು, ಅನುಶ್ರೀ ನಾಚಿ ನೀರಾಗಿದ್ದಾರೆ.
ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಫಿ ನಾಡು ಚಂದು ಎಂಬ ವ್ಯಕ್ತಿ ಹ್ಯಾಪಿ ಬರ್ಥ್ ಡೇ ಎಂದು ಎಲ್ಲರಿಗೂ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಫ್ಹೇಮಸ್ ಆಗಿದ್ದರು.
ಇನ್ನು ಇತ್ತೀಚೆಗೆ ಕಾಫಿ ನಾಡು ಚಂದು ಅವರಿಗೆ ಅಭಿಮಾನಿ ಬಳಗ ಕೂಡ ಹುಟ್ಟು ಕೊಂಡಿದೆ. ಇನ್ನು ಸ್ತಾರ ನಟ ನಟಿಯರನ್ನು ಭೇಟಿ ಮಾಡುತ್ತಾ ಚಂದು ಅವರ ಮೇಲೆ ಹಾಡು ಬರೆದು ಅದನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಅಕೌಂಟ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ನಿರೂಪಕಿ ಅನುಶ್ರೀ ಅವರನ್ನು ಕಾಫಿ ನಾಡು ಚಂದು ಭೇಟಿ ಮಾಡಿದ್ದು, ಅನುಶ್ರೀ ಅವರ ಮೇಲೆ ಕೂಡ ತಮ್ಮದೆ ಸ್ಟೈಲ್ ನಲ್ಲಿ ಹಾಡು ಬರೆದಿದ್ದಾರೆ. ಇದೀಗ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.