ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್, ಕಲಿಯುಗ ಕರ್ಣ ಎಂದೇ ಖ್ಯಾತಿ ಪಡೆದಿದ್ದವರು ನಟ ಅಂಬರೀಶ್. ಇವರ ಸ್ವಭಾವ ಒರಟಾದರು ಮನಸ್ಸು ಮಗುವಿನಂಥದ್ದು, ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಬದುಕಿದ್ದ ಅಷ್ಟು ದಿನಗಳ ಕಾಲ ಅನೇಕ ಜನರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ.
ಅಂಬರೀಶ್ ಅವರ ಈ ಸಹಾಯ ಮನೋಭಾವದಿಂದಲೇ ಅವರಿಗೆ ಬಹು ದೊಡ್ಡ ಅಭಿಮಾನಿ ಬಳಗ ಇದೆ. ಅಂಬರೀಶ್ ಅವರು ಜನರಿಗೆ ತಾವು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿರಲಿಲ್ಲ.
ಅಂಬರೀಶ್ ಅವರ ಮನೆಯ ಮುಂದೆ ಕಷ್ಟ ಎಂದು ಯಾರೇ ಹೋದರು, ಅವರನ್ನು ಖಾಲಿ ಕೈಯಲ್ಲಿ ಕಳಿಸಿದ್ದೆ ಇಲ್ಲ ನಟ ಅಂಬರೀಶ್ ಚಿತ್ರರಂಗದಲ್ಲಿ, ಚಿತ್ರರಂಗದ ಹೊರಗೆ, ಸಾಮಾನ್ಯ ಜನರು ಹೀಗೆ ಅನೇಕರು ಅಂಬರೀಶ್ ಅವರ ಸಹಾಯ ಪಡೆದಿದ್ದಾರೆ.
ಇನ್ನು ನಟ ಅಂಬರೀಶ್ ಅವರು ತಮ್ಮ ನಟನೆ ಹಾಗೂ ಸಾಮಾಜಿಕ ಕಾರ್ಯಕಾಗಳ ಜೊತೆಗೆ ತಮ್ಮ ನೇರ ನುಡಿಗಳಿಂದ ಸಕತ್ ಫ್ಹೇಮಸ್ ಆಗಿದ್ದರು. ಅಂಬರೀಶ್ ಅವರಿಗೆ ಯಾವಾಗಲೂ ಅವರ ಪತ್ನಿ ಸುಮಲತಾ ಹಾಗೂ ಅವರ ಮಗ ಅಭಿಷೇಕ್ ಅವರ ಸಹಕಾರ ಇತ್ತು ಎಂದರೆ ತಪಲಾಗುವುದಿಲ್ಲ.
ಇನ್ನು ಅಂಬರೀಷ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ಮೇಲೆ ಸುಮಲತಾ ಅವರು ಅವರ ಕನಸ್ಸುಗಳನ್ನು ನೆರವೇರಿಸಲು ನಿಂತಿದ್ದಾರೆ. ಸುಮಲತಾ ಅವರು ರಾಜಕೀಯ ಕ್ಷೇತ್ರದಲ್ಲಿ ಇದೀಗ ಸಕ್ರಿಯರಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ.
ಇನ್ನು ಅಭಿಷೇಕ್ ಅಂಬರೀಷ್ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇದೀಗ ಅವರು ಕೂಡ ತಂದೆಯಂತೆ ಸಿನಿಮಾಗಳ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ, ಸುಮಲತಾ ಅವರ ರಾಜಕೀಯ ಕೆಲಸಗಳಲ್ಲಿ ಸಹ ಸಹಾಯ ಮಾಡುತ್ತಿದ್ದಾರೆ.
ಇನ್ನು ನಟ ಅಂಬರೀಷ್ ಅವರು ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ಇವರ ಮನೆಯನ್ನು ಆಧುನಿಕತೆಯ ಜೊತೆಗೆ, ಸಾಂಪ್ರದಾಯಿಕವಾಗಿ ಕಟ್ಟಿಸಿದ್ದಾರೆ. ಮನೆಯ ಒಳಗಡೆ ಸುಂದರವಾದ ಪೇಂಟಿಂಗ್ ಗಳು, ಮನೆಯ ಹೊರಗೆ ಸಾಕಷ್ಟು ಗಿಡ ಮರ ಇರುವ ಗಾರ್ಡನ್, ಮನೆಯೊಳಗೆ ಐಷಾರಾಮಿ ಉಪಕರಣಗಳು. ಜೊತೆಗೆ ಮಕ್ಕಳಿಗೆ ಇಷ್ಟ ಆಗುವಂಥಹ ವಾತಾವರಣ ನಟ ಅಮಬರೀಶ್ ಅವರ ಮನೆಯಲ್ಲಿದೆ. ಇವರ ಮನೆಯು ಎಷ್ಟು ಸುಂದರವಾಗಿದೆ ಎಂದು ನೀವು ಸಹ ಒಮ್ಮೆ ನೋಡಿ..