ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರ ರಂಗದ ರಾಣಿಯಾಗಿ ಸಿನಿಪ್ರಿಯರ ಮನ ಗೆದ್ದ ನಟಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಅವರು ಇದೀಗ ದರ್ಶನ ಅವರೊಂದಿಗೆ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡುತ್ತಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ.
ಆದರೆ ಇದೀಗ ರಾಧಾ ನರಮ್ ಅವರು ಡಿ ಬಾಸ್ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ . ಇಷ್ಟು ಚಿಕ್ಕ ಹುಡುಗಿ ಅಷ್ಟು ದೊಡ್ಡ ಸ್ಟಾರ್ ನಟನ ಬಗ್ಗೆ ಹೇಳಿದ್ದಾದರೂ ಏನು ಎಂದು ನೋಡೋಣ ಬನ್ನಿ. ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಡಿ ಬಾಸ್ ಅವರ 56ನೇ ಸಿನಿಮಾದ ಚಿತ್ರೀಕರಣ ಸೆಟ್ಟೇರಿದೆ.
ಸದ್ಯಕ್ಕೆ ಹೆಸರಿಡದ ಈ ಸಿನಿಮಾದಲ್ಲಿ ರಾಧನಾ ರಾಮ್ ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿನಿಂದಲೂ ಹೀರೋಯಿನ್ ಆಗುವ ಆಸೆಯನ್ನು ಬೆಳೆಸಿಕೊಂಡಿದ್ದ ರಾಧನಾ ರಾಮ್ ಅವರು ಕಳೆದ ನಾಲ್ಕೈದು ವರ್ಷಗಳಿಂದ ಸಿನಿಮಾದ ಹೀರೋಯಿನ್ ಆಗಲು ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಮುಂಬೈನಲ್ಲಿ ಅಭಿನಯ ತರಬೇತಿಯನ್ನು ಪಡೆದುಕೊಂಡ ರಾಧನರಾಮ್ ಅವರು ಈಗ ಹೀರೋಯಿನ್ ಆಗಿ ಪೂರ್ಣ ಪ್ರಮಾಣದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಮಾಲಾಶ್ರೀ ಅವರ ಪುತ್ರಿಯ ಮೊದಲ ಹೆಸರು ಅನನ್ಯ ಮನೆಯಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ಅನಿ ಎಂದು ಕರೆಯುತ್ತಾರೆ.
ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿರುವ ಅವರು ರಾಧನಾ ರಾಮ್ ಎಂದು ಅವರ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ದೊಡ್ಡ ಬ್ಯಾನರ್ ನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದಕ್ಕೆ ಬಹಳ ಎಕ್ಸೈಟ್ ಆಗಿದ್ದಾರೆ. ನಾನಿನ್ನು ಶಾ,ಕ್ ನಲ್ಲೇ ಇದ್ದೇನೆ ಎನ್ನುತ್ತಾರೆ.
ದರ್ಶನ್ ಸರ್ ಅವರ ಕಲಾಸಿಪಾಳ್ಯ ಚಿತ್ರದ ಬ್ಯಾನರ್ ನಮ್ಮ ಹೋಂ ಅಡಿಯಲ್ಲಿ ನಿರ್ಮಿಸಲಾಗಿದೆ. ಮತ್ತು ನಾನು ಅವರ ಸಿನಿಮಾಗಳ ಅಭಿಮಾನಿ ಎಂದು ರಾಧನಾ ರಾಮ್ ಅವರು ತಿಳಿಸಿದ್ದಾರೆ. ದರ್ಶನ್ ಸರ್ ತುಂಬಾನೇ ಹಂಬಲ್ ಪರ್ಸನ್ ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲರಿಗೂ ಪ್ರೀತಿ ಗೌರವವನ್ನು ಕೊಡುತ್ತಾರೆ.
ಬನ್ನಿ ಅಮ್ಮ ಹೋಗಿ ಅಮ್ಮ ಎಂದು ತುಂಬಾನೇ ಗೌರವದಿಂದ ಮಾತನಾಡಿಸುತ್ತಾರೆ. ಅಪ್ಪನಿಗೆ ನನ್ನ ಸಿನಿಮಾ ನೋಡಬೇಕು ಮತ್ತು ಬ್ಯಾನರ್ ಅಡಿಯಲ್ಲಿ ನನ್ನನ್ನ ಲಾಂಚ್ ಮಾಡಬೇಕೆಂದು ಆಸೆ ಹೊಂದಿದ್ದರು ಆದರೆ ಅಪ್ಪ ಇದೀಗ ನಮ್ಮೊಂದಿಗಿಲ್ಲ . ದರ್ಶನ್ ಸರ್ ಅವರು ಅವರ ಪ್ರೀತಿಯಿಂದ ಆ ನೋವನ್ನು ಸ್ವಲ್ಪಮಟ್ಟಿಗೆ ಮರೆಸಿದ್ದಾರೆ. ದರ್ಶನ್ ಸರ್ ಅವರೊಂದಿಗೆ ನಟಿಸಲು ಭಯವಿದೆ ಆದರೆ ಅವರು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.