ಇತ್ತೀಚೆಗೆ ನಡೆದ ಅಪ್ಪು ಅವರ ಪುನೀತ ಪರ್ವ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಅವರು ಬರಲಿಲ್ಲ ಎಂದು ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದರು. ಇನ್ನು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲಾಗದ ಕಾರಣ ದರ್ಶನ್ ಅಪ್ಪು ಅವರ ಸ-ಮಾಧಿ ಬಳಿ ಹೋಗಿ ಅಪ್ಪು ಅವರ ದರ್ಶನ ಪಡೆದು ಬಂದಿದ್ದಾರೆ, ಎನ್ನುವ ಸುದ್ದಿ ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು.
ಆದರೆ ಕೆಲವರು ಈ ಮಾಹಿತಿ ಸುಳ್ಳು ಎಂದು ಕಾಮೆಂಟ್ ಮಾಡಿದ್ದರು ಇನ್ನು ಕೆಲವರು ನಿಜಕ್ಕೂ ಡಿ ಬಾಸ್ ದರ್ಶನ್ ಅಪ್ಪು ಅವರ ಸ-ಮಾಧಿ ಬಳಿ ಹೋಗಿದ್ದರು ಎಂದಿದ್ದರು. ಹಾಗಾದರೆ ಈ ವಿಷಯ ನಿಜಾನಾ ಎಂದು ತಿಳಿಸುತ್ತೇವೆ ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಮೊದಲನೆಯದಾಗಿ ದರ್ಶನ್ ಅಪ್ಪು ಅವರ ಬಗ್ಗೆ ಅಪಾರ ಅಭಿಮಾನ ಹಾಗೂ ಗೌರವವನ್ನ ಇಟ್ಟುಕೊಂಡಿದ್ದಾರೆ. ಅದನ್ನು ಪ್ರಮುಖವಾಗಿ ಹಲವಾರು ಬಾರಿ ಹೇಳಿಕೊಂಡು ಸಹ ಇದ್ದಾರೆ. ದೊಡ್ಮನೆ ಎಂದರೆ ನಮಗೆ ಯಾವತ್ತಿದ್ದರೂ ದೊಡ್ಮನೆನೆ. ನಾವೆಲ್ಲ ಅವರ ಕಾಲಿನ ದೂಳಿಗೂ ಸಮ ಬರೋದಿಲ್ಲ ಎಂದಿದ್ದರು.
ಇನ್ನು ಕೆಲವು ಕಿಡಿಗೇಡಿಗಳ ಕಾರಣದಿಂದ ಆಗಾಗ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕಿರಿಕಿರಿ ಉಂಟಾಗಿ ಸ್ಟಾರ್ ವಾರ್ ಗಳು ನಡೆದರೂ ಕೂಡ, ಡಿ ಬಾಸ್ ಅಭಿಮಾನಿಗಳು ಅಪ್ಪು ಅವರನ್ನು ಅಷ್ಟೇ ಗೌರವದಿಂದ ನೋಡುತ್ತಾರೆ.
ಸದ್ಯ ಡಿ ಬಾಸ್ ದರ್ಶನ್ ಅವರು ತಮ್ಮ ಮುಂದಿನ ಸಿನಿಮಾ ಡಿ 56 ಶೂಟಿಂಗ್ ಕೆಲಸಗಳಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಕಾರಣಗಳಿಂದ ಅವರು ಅಪ್ಪು ಅವರ ಸ-ಮಾಧಿ ಬಳಿ ಹೋಗಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಮೂಲಗಳಿಂದ ತಿಳಿದು ಬರುತ್ತಿದೆ.
ಸದ್ಯ ದರ್ಶನ್ ಅವರು ಅಪ್ಪು ಸ-ಮಾಧಿಯ ಬರಲಿಲ್ಲ, ಆದರೆ ದರ್ಶನ್ ಅವರು ಮೊದಲಿನಿಂದಲೂ ಸಹ ಅಪ್ಪು ಅವರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ಇನ್ನು ದರ್ಶನ್ ಅವರು ಕೂಡ ಇದುವರೆಗೂ ಯಾವುದೇ ಕಾರಣಕ್ಕೂ ಅಪ್ಪು ಅವರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ, ಬದಲಿಗೆ ಅಪ್ಪು ಅವರ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ.
ಏನೇ ಆಗಲಿ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳು ಇದೆ ರೀತಿ ಒಂದಾಗಿರಲಿ ಎಂದು ಸಾಕಷ್ಟು ಜನ ಕೇಳಿಕೊಳ್ಳುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…