ಕನ್ನಡ ಚಿತ್ರರಂಗದ ಸಾಹಸ ಸಿಂಹ ಎಂದೇ ಗುರುತಿಸಿಕೊಂಡಿರುವ ಮೇರು ನಟ ದಿವಂಗತ ವಿಷ್ಣುವರ್ಧನ್. ಅವರು ಇಂದು ನಮ್ಮ ಜೊತೆಗೆ ಇಲ್ಲದ ಇರಬಹುದು, ಆದರೆ ಅವರ ನೆನಪುಗಳು ಮಾತ್ರ ಸದಾ ಎಲ್ಲರ ಮನದಲ್ಲಿ ಉಳಿದಿರುತ್ತದೆ. ವಿಷ್ಣುವರ್ಧನ್ ಹೆಸರು ಕೇಳಿದ ತಕ್ಷಣವೇ,
ಎಲ್ಲರಿಗೂ ನೆನಪಾಗುವುದು ಅವರ ಅದ್ಭುತ ನಟನೆ ಅಂತಹ ವ್ಯಕ್ತಿ ಇಂದು ನಮ್ಮ ಜೊತೆಗಿಲ್ಲ ಎಂದರೆ ನಿಜಕ್ಕೂ ಬೇಸರದ ವಿಷಯ. ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ವರ್ಷಗಳು ಕಳೆದುಹೋಗಿದೆ ಆದರೂ ಸಹ ಅವರು ಇಂದಿಗೂ ಸಿನಿಮಾಗಳ ಮೂಲಕ ನಮ್ಮ ಜೊತೆ ಇದ್ದಾರೆ.
ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಅವೆಲ್ಲವೂ ನೆರವೇರುವ ಮೊದಲೇ ಆ ದೇವರು ಅವರನ್ನು ನಮ್ಮಿಂದ ದೂರ ಕರೆದುಕೊಂಡು ಹೋಗಿಬಿಟ್ಟರು. ಇದೀಗ ಅವರ ಎಲ್ಲಾ ಕನಸುಗಳನ್ನು ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಮನಸ್ಸು ಮಾಡಲು ಮುಂದಾಗಿದ್ದಾರೆ.
ಇಟ್ಟು ಇದೀಗ ವಿಷ್ಣುವರ್ಧನ್ ಅವರ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಅವರ ಪತ್ನಿ, ಭಾರತಿ ವಿಷ್ಣುವರ್ಧನ್ ಸದ್ಯ ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಚಿತ್ರರಂಗದ ಎಲ್ಲಾ ಸ್ಟಾರ್ ನಟ ನಟಿಯರು ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಆಗುತ್ತಿದೆ.
ವಿಷ್ಣುವರ್ಧನ್ ಅವರ ನೆನಪುಗಳನ್ನೆಲ್ಲ ಕೂಡಿಟ್ಟು, ಇದೀಗ ಭಾರತೀ ವಿಷ್ಣು ವರ್ಧನ್ ಅವರು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಇನ್ನು ಈ ಮನೆಗೆ ವಾಲ್ಮೀಕಿ ಎಂದು ಸಹ ನಾಮಕರಣ ಮಾಡಲಾಗಿದೆ. ಅಲ್ಲದೆ ಮನೆಯ ಹೊರಗೆ ವಾಲ್ಮೀಕಿ ಎನ್ನುವ ಹೆಸರ ಜೊತೆಗೆ ಸಿಂಹದ ಚಿನ್ಹೆ ಕೂಡ ಇದೆ.
ಸದ್ಯ ಈ ಮನೆಯ ಗೃಹಪ್ರವೇಶ ಅದ್ದೂರಿಯಾಗಿ ನಡೆದಿದ್ದು ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಸೇರಿದಂತೆ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಹ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..