ವಿಜಯಪುರದ ಜೀವಂತ ದೇವರು ಎಂದೇ ಪ್ರಸಿದ್ಧರಾಗಿದ್ದ ಅಧ್ಯಾತ್ಮಿಕ ಪವಚನಕಾರಿ ಸಿದ್ದೇಶ್ವರ ಸ್ವಾಮೀಜಿ ಅವರು ಇನ್ನು ಕೇವಲ ನೆನಪು ಮಾತ್ರ ಎನ್ನುವ ವಿಷಯ ತಿಳಿದಂತೆ ಎಲ್ಲೆಡೆ ಸಂಪೂರ್ಣ ಮೌನ ಆವರಿಸಿದೆ. ಇವರು ತಮ್ಮ ಪ್ರವಚನಗಳ ಮೂಲಕ ಅದೆಷ್ಟೋ ಜನರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು.
ಇವರ ಪ್ರವಚನಗಳನ್ನು ಕೇಳಿದ ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದರು. ಅಲ್ಲದೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಭಾಷಣಗಳನ್ನು ಕೇಳಿದ ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ರೂಪಾಂತರಗಳು ಆಗಿದ್ದು, ಅವರ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿದೆ ಎಂದು ಸಾಕಷ್ಟು ಜನ ನಂಬಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಅವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ, ಇನ್ನು ಸಿದ್ದೇಶ್ವರ ಅವರು ವಿಜಯಪುರದ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು. ಇನ್ನು ಸಿದ್ದೇಶ್ವರ ಅವರು ಒಬ್ಬ ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದವರಾಗಿದ್ದು, ಇವರು ತಮ್ಮ ಸಣ್ಣ ವಯಸ್ಸಿನಿಂದಲೆ ಅಧ್ಯಾತ್ಮಿಕ ಚಿಂತನೆಯಲ್ಲಿ ಸಾಕಷ್ಟು ಮುಳುಗಿ ಹೋಗಿದ್ದರು.
ಇನ್ನು ಸಿದ್ದೇಶ್ವರ ಸ್ವಾಮೀಜಿ ಅವರು ಆಧ್ಯಾತ್ಮಿಕತೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಇವರು ತುಂಬಾ ಶಾಂತ ಸ್ವಭಾವದವರಾಗಿದ್ದರು. ಇನ್ನು ಕನ್ನಡ ಸೇರಿದಂತೆ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳಲ್ಲಿ ಸಿದ್ದೇಶ್ವರ ಅವರು ನಿಪುಣರು ಸಹ ಆಗಿದ್ದರು. ಇನ್ನು ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಶಿಷ್ಯರಾಗಿದ್ದರು.
ಇನ್ನು ಜ್ಞಾನಯೋಗಾಶ್ರಮದಲ್ಲಿ ಸಾವಿರಾರು ಮಕ್ಕಳಿಗೆ ಊಟ ವಸತಿ ವ್ಯವಸ್ಥೆ ಮಾಡಿ ಕೊಡಲಾಗಿತ್ತು. ಇನ್ನು ಆ ಮಕ್ಕಳಲ್ಲಿ ಸಿದ್ದೇಶ್ವರ ಅವರು ಕೂಡ ಒಬ್ಬರಾಗಿದ್ದರು. ಇನ್ನು ಸಿದ್ದೇಶ್ವರ ಅವರ ಚುರುಕುತನ ನೋಡಿ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಿದ್ದೇಶ್ವರ ಅವರನ್ನು ತಮ್ಮ ಜೊತೆಗೆ ಎಲ್ಲಾ ಕಡೆ ಪ್ರವಚನಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
ಇನ್ನು ಮಲ್ಲಿಕಾರ್ಜುನ ಅವರ ಜೊತೆಗೆ ಸಿದ್ದೇಶ್ವರ ಅವರು ಇದ್ದುಕೊಂಡೇ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದರು. ಇಲ್ಲದೆ ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರ ವಿಷಯದಲ್ಲಿ ಎಂ ಎ ಪದವಿಯನ್ನು ಸಹ ಪೂರ್ಣಗೊಳಿಸಿದ್ದಾರೆ. ಇನ್ನು ಸಿದ್ದೇಶ್ವರ ಅವರು ಪ್ರವಚನಗಳನ್ನು ಕೇಳಲು ಬರುತ್ತಿದ್ದ,
ಭಕ್ತಾದಿಗಳು ಅವರ ಮಾತುಗಳನ್ನು ಕೇಳಿ ಮೈಮರೆತು ಹೋಗುತ್ತಿದ್ದರು. ಇನ್ನು ಅವರ ಪ್ರವಚನಗಳನ್ನು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದರು. ಭಾರತ ಸರ್ಕಾರ ಸಿದ್ದೇಶ್ವರ ಅವರಿಗೆ ತಮ್ಮ ಕೆಲಸಗಳಿಗೆ ಅತ್ಯುನ್ನತ ಹಾಗೂ ಪದ್ಮ ಶ್ರೀ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲು ನಿರ್ಧರಿಸಿತು, ಆದರೆ ಸಿದ್ದೇಶ್ವರ ಅವರು ಅದನ್ನು ಅಷ್ಟೇ ಗೌರವದಿಂದ ಇಂತ್ತುರಿಗಿಸಿ, ತಾನೊಬ್ಬ ಸಾಮಾನ್ಯ ವ್ಯಕ್ತಿ, ತನ್ನ ಆಧ್ಯಾತ್ಮಿಕ ಮಾತುಗಳ ಮೂಲಕ ಜನರ ಜೀವನ ಸರಿ ಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ,
ನನಗೆ ಯಾವುದೇ ಪ್ರಶಸ್ತಿ ಬೇಡ ಎಂದಿದ್ದರು. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಸಿದ್ದೇಶ್ವರ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಘೋಷಿಸಿತ್ತು ಆದರೆ ಅದನ್ನು ಸಹ ಸಿದ್ದೇಶ್ವರ ಅವರು ಸ್ವೀಕರಿಸಲಿಲ್ಲ. ಇನ್ನು ಅದೆಷ್ಟೋ ಪ್ರಶಸ್ತಿಗಳನ್ನು ಅವರು ಸ್ವೀಕರಿಸದೆ ಅದನ್ನು ಇಂತುರುಗಿಸಿದ್ದಾರೆ. ಹಾಗೂ ತಾವು ಲಿಂ-ಗೈ-ಕ್ಯರಾದಮೇಲೆ ಅವರ ದೇಹದ ಬಗ್ಗೆ ಅವರ ಆಸೆ ಎನಿತ್ತು ಗೊತ್ತಾ ಈ ಪತ್ರದ ೧೨ನೇ ಸಂಖ್ಯೆಯಲ್ಲಿ ತಮ್ಮ ಆಸೆ ಹೇಳಿದ್ದಾರೆ ನೋಡಿ.