ಕನ್ನಡದ ಟಾಪ್ ನಟಿಯರ ಪೈಕಿ ನಟಿ ಮೇಘನಾ ರಾಜ್ ಕೂಡ ಒಬ್ಬರು. ತಮ್ಮ ಅಧ್ಭುತ ನಟನೆಯ ಮೂಲಕ ನಟಿ ಮೇಘನಾ ರಾಜ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ ನಟಿ ಮೇಘನಾ ರಾಜ್ ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಚಿರು ನಿಧನದ ಬಳಿಕ ಚಿತ್ರರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದರು. ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಖುಷಿ ತಂದು ಕೊಟ್ಟಿದ್ದಾರೆ.
ನಟಿ ಮೇಘನಾ ರಾಜ್ ಇದೀಗ ಸಿನಿಮಾ ಶೂಟಿಂಗ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಚಿರು ನಿಧನದ ಬಳಿಕ ಮಗನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮೇಘನಾ ರಾಜ್ ಅವರು, ಮಗನ ಭವಿಷ್ಯ ರೂಪಿಸಲು ತುಂಬಾನೇ ಶ್ರಮ ವಹಿಸುತ್ತಿದ್ದಾರೆ.
ಇದೀಗ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಮೇಘನಾ ರಾಜ್ ಮನೆಗೆ ಬಂದು ರಾಯನ್ ಅನ್ನು ತಮ್ಮ ಕುಟುಂಬಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದ್ದಕ್ಕಿದ್ದಂತೆ ರಾಯನ್ ರಾಜ್ ಕುಟುಂಬಕ್ಕೆ ಹೋಗಿದ್ದೇಕೆ, ಇದಕ್ಕೆ ಮೇಘನಾ ರಾಜ್ ಹೇಳಿದ್ದೇನು? ಅದೆಲ್ಲಾ ಸಂಪೂರ್ಣವಾಗಿ ನೋಡೋಣ ಬನ್ನಿ…
ಮೇಘನಾ ರಾಜ್ ಅವರಿಗೆ ರಾಯನ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಚಿರು ನಿಧನದ ಬಳಿಕ ಮೇಘನಾ ರಾಜ್ ಅವರಿಗೆ ರಾಯನ್ ಅವರ ಸರ್ವಸ್ವ ಆಗಿದ್ದಾನೆ. ಆ ಪುಟ್ಟ ಕಂದಮ್ಮನ ನಗುವನ್ನು ನೋಡುತ್ತಾ ಮುಂದಿನ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ ನಟಿ ಮೇಘನಾ ರಾಜ್.
ಮೇಘನಾ ರಾಜ್ ಅವರು ಇದೀಗ ಶೂಟಿಂಗ್ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದಾರೆ. ಇನ್ನು ರಾಯನ್ ರಾಜ್ ಇನ್ನು ಚಿಕ್ಕವನಾಗಿರುವುದರಿಂದ ಅವನನ್ನು ನಟಿ ತಮ್ಮ ತಾಯಿ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಮೇಘನಾ ಮನೆಗೆ ಬಂದು ರಾಯನ್ ಅನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ರಾಯನ್ ಗೆ ಅವರ ಚಿಕ್ಕಪ್ಪ ಧ್ರುವ ಸರ್ಜಾ ಎಂದರೆ ತುಂಬಾನೇ ಇಷ್ಟ. ಧ್ರುವ ಸರ್ಜಾ ಅವರನ್ನು ನೋಡಿದರೆ ಸಾಕು ಓಡಿ ಬಂದು ಅವರ ಬೆನ್ನ ಮೇಲೆ ಕೂರುತ್ತಾನೆ, ಅವರ ಗಡ್ಡ ಎಳೆಯುತ್ತಾನೆ. ಆದ್ದರಿಂದ ತಾಯಿ ಮೇಘನಾ ಇಲ್ಲವೆಂದರೂ ಸಹ ರಾಯನ್ ಹಠ ಮಾಡುವುದಿಲ್ಲ.
ಎಲ್ಲರೊಂದಿಗೆ ಹೊಂದಿಕೊಂಡು ಆಟವಾಡುತ್ತಾ ಖುಷಿಯಿಂದ ಇರುತ್ತಾನೆ. ರಾಯನ್ ಅನ್ನು ನೋಡಿ ಚಿರು ತಾಯಿ ಅಮ್ಮಾಜಿ ಹಾಗೂ ಕುಟುಂಬದವರು ಸಂತೋಷದಿಂದ ಮುದ್ದಾಡಿದ್ದಾರೆ. ಚಿರುವಾಗಿರುವ ರಾಯನ್ ಎಲ್ಲರ ಮುಖದಲ್ಲಿ ನಗು ತರಿಸಿದ್ದಾನೆ ಎಂದರೆ ತಪ್ಪಾಗಲಾರದು. ನೀವು ಸಹ ರಾಯನ್ ಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ.